ಅಂಜಾಮ್ (ಅನುವಾದ: ಪರಿಣಾಮಗಳು ) ೧೯೯೪ರಲ್ಲಿ ತೆರೆಕಂಡ ರಾಹುಲ್ ರಾವೈಲ್ ನಿರ್ದೇಶಿಸಿದ ಹಿಂದಿ ಭಾಷೆಯ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದರಲ್ಲಿ ಮಾಧುರಿ ದೀಕ್ಷಿತ್ ಮತ್ತು ಶಾರುಖ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಕ್ ತಿಜೋರಿ ಅತಿಥಿ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ದೀಕ್ಷಿತ್ ಮತ್ತು ಖಾನ್ ಒಟ್ಟಿಗೆ ನಟಿಸಿದರು. ಚಿತ್ರದ ಸಂಗೀತವನ್ನು ಆನಂದ್-ಮಿಲಿಂದ್ ಸಂಯೋಜಿಸಿದ್ದಾರೆ. ಸಾಹಿತ್ಯವನ್ನು ಸಮೀರ್ ಬರೆದಿದ್ದಾರೆ. ಈ ಚಿತ್ರವು ತನ್ನ ಮೇಲೆ ಅತಿಯಾದ ಪ್ರೀತಿಯಿರುವ ಪ್ರೇಮಿಯ ಕಾಟವನ್ನು ಎದುರಿಸುತ್ತಿರುವ ಮಹಿಳೆಯ ಬಗ್ಗೆ ಹೇಳುತ್ತದೆ. ಇದು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆಯೂ ಗಮನ ಹರಿಸುತ್ತದೆ. ದೀಕ್ಷಿತ್ ನಾಯಕಿಯಾಗಿ ಮತ್ತು ಖಾನ್ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿನ ವರ್ಷ ಯಶ್ ಚೋಪ್ರಾ ಅವರ ದರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಗೆಲ್ಲಲು ವಿಫಲವಾದ ನಂತರ 40ನೇ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ, ಅಂಜಾಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ಶಾರುಖ್ ಖಾನ್ ಅತ್ಯುತ್ತಮ ಖಳನಾಯಕ ಪ್ರಶಸ್ತಿಯನ್ನು ಗೆದ್ದರು. ಇದಲ್ಲದೆ, ಈ ಚಿತ್ರವು ದೀಕ್ಷಿತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ 7ನೇ ಬಾರಿಯ ನಾಮನಿರ್ದೇಶನವನ್ನು ಗಳಿಸಿಕೊಟ್ಟಿತು. ಆದರೆ ಅವರು ಹಮ್ ಆಪಕೇ ಹೈ ಕೌನ್..! ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು ಖಾನ್ ತಮ್ಮ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ಚಿತ್ರದ ಹಕ್ಕುಗಳನ್ನು ಖರೀದಿಸಿದ್ದಾರೆ. == ಕಥಾವಸ್ತು == ಕಥಾನಾಯಕಿ ಶಿವಾನಿ ಚೋಪ್ರಾ ಏರ್ ಇಂಡಿಯಾ ಏರ್ ಹೊಸ್ಟೆಸ್ ಆಗಿದ್ದಾರೆ. ಆಕೆ ತನ್ನ ಸಹೋದರಿ ಪದ್ಮಿಶಾ ಮತ್ತು ಆಕೆಯ ಭಾವ ಮೋಹನ್ ಲಾಲ್ ಅವರೊಂದಿಗೆ ವಾಸಿಸುತ್ತಾಳೆ. ಭಾವ ಕುದುರೆ ಜೂಜಿನಲ್ಲಿ ತನಗೆ ಸಿಗಬಹುದಾದ ಎಲ್ಲಾ ಹಣವನ್ನು ಪಣಕ್ಕಿಡುತ್ತಾರೆ. ಶಿವಾನಿ ಒಮ್ಮೆ ಶ್ರೀಮಂತ ಕೈಗಾರಿಕೋದ್ಯಮಿ ವಿಜಯ್ ಅಗ್ನಿಹೋತ್ರಿಯನ್ನು ಭೇಟಿಯಾಗುತ್ತಾಳೆ. ಅವರು ತಕ್ಷಣವೇ ಅವಳ ಮೇಲೆ ಮೋಹಗೊಳ್ಳುತ್ತಾರೆ. ಆದರೆ ಅವಳು ಅವರ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ವಿಜಯ್ ತನ್ನ ಕುಟುಂಬದ ಕೈಗಾರಿಕೆಗಳ ಮಾಲೀಕರಾಗಿದ್ದು ಮೊದಲು ಶಿವಾನಿಯನ್ನು ತನ್ನ ಕೈಗಾರಿಕೆಗಳಿಗೆ ಮಾಡೆಲ್ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಅವಳು ಅದನ್ನು ಪರಿಗಣಿಸುವುದಿಲ್ಲ. ಅವನು ತನ್ನ ಪ್ರೇಮಿಯೆಂದು ಅವಳನ್ನು ಬೆನ್ನಟ್ಟುವುದನ್ನು ಮುಂದುವರೆಸುತ್ತಾನೆ. ಆದರೆ ಪ್ರತೀ ಬಾರಿಯೂ ತಿರಸ್ಕರಿಸಲ್ಪಡುತ್ತಾನೆ. ತಾನು ಶಿವಾನಿಯನ್ನು ಮಾತ್ರ ಮದುವೆಯಾಗುತ್ತೇನೆ ಎಂದು ವಿಜಯ್ ತನ್ನ ತಾಯಿ ಪದ್ಮಾಗೆ ತಿಳಿಸುತ್ತಾನೆ. ಶಿವಾನಿಯ ಮದುವೆಗೆ ಕೈ ಹಾಕಲು ಅವರು ಶಿವಾನಿಯ ಕುಟುಂಬವನ್ನು ಸಂಪರ್ಕಿಸಿದಾಗ, ಶಿವಾನಿ ಈಗಾಗಲೇ ಏರ್ ಇಂಡಿಯಾ ಪೈಲಟ್ ಅಶೋಕ್ ಚೋಪ್ರಾರನ್ನು ಮದುವೆಯಾಗಿದ್ದಾರೆ ಎಂದು ತಿಳಿಯುತ್ತದೆ. ಶಿವಾನಿ ಮತ್ತು ಅಶೋಕ್ ತಮ್ಮ ಮದುವೆಯ ನಂತರ ಅಮೆರಿಕಕ್ಕೆ ಹೋಗುತ್ತಾರೆ. ಇತ್ತ ಉದ್ಯಮಿ ಮತ್ತು ಶಿವಾನಿಯ ಪ್ರೇಮಿ ವಿಜಯ್ ತೀವ್ರ ಆಘಾತ ಮತ್ತು ನಿರಾಶೆಗೆ ಒಳಪಡುತ್ತಾನೆ. ನಾಲ್ಕು ವರ್ಷಗಳ ನಂತರವೂ ವಿಜಯ್ಗೆ ಶಿವಾನಿಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ಆತ ತನ್ನ ತಾಯಿ ತಂದ ಎಲ್ಲಾ ಮದುವೆಯ ಪ್ರಸ್ತಾಪಗಳನ್ನು ತಿರಸ್ಕರಿಸುತ್ತಾನೆ. ಶಿವಾನಿ ಮತ್ತು ಅಶೋಕ್ ಅವರಿಗೆ ಪಿಂಕಿ ಎಂಬ ಮಗಳು ಹುಟ್ಟುತ್ತಾಳೆ . ಈ ನಡುವೆ ಶಿವಾನಿ ಏರ್ ಹೊಸ್ಟೆಸ್ ಆಗಿ ತನ್ನ ಕೆಲಸವನ್ನು ತೊರೆದು ಮಾನಸಿಕ ಮತ್ತು ದೈಹಿಕವಾಗಿ ಅಂಗವಿಕಲರಿಗಾಗಿ ಇರುವ ಆಸ್ಪತ್ರೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ . ಶಿವಾನಿಗೆ ಹತ್ತಿರವಾಗುವ ಆಶಯದಿಂದ ವಿಜಯ್ ಅಶೋಕನೊಂದಿಗೆ ಸ್ನೇಹ ಬೆಳೆಸುತ್ತಾನೆ. ಆತ ತನ್ನದೇ ಆದ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಲು ಯೋಜಿಸುತ್ತಾನೆ. ಅಲ್ಲಿ ಆತ ಹೆಚ್ಚಿನ ಸಂಬಳದೊಂದಿಗೆ ಜನರಲ್ ಮ್ಯಾನೇಜರ್ ಆಗಿ ಅಶೋಕ್ ಅವರನ್ನು ನೇಮಿಸಿಕೊಳ್ಳುತ್ತಾನೆ. ವಿಜಯ್ ಅವರ ಉದ್ದೇಶಗಳ ಅರಿವಿಲ್ಲದೆ, ವಿಜಯ್ ಅವರ ನಿಜವಾದ ಬಣ್ಣಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸುವ ಶಿವಾನಿಯನ್ನು ಅಶೋಕ್ ನಂಬುವುದಿಲ್ಲ. ವಿಜಯ್ ಶಿವಾನಿ ಮತ್ತು ಅಶೋಕ್ಗೆ ಹೊಸ ಕಂಪನಿಯ ಮನೆ ಕೊಡುತ್ತಾನೆ. ಆ ಮನೆಯ ಒಳಗೆ ಹೋದ ನಂತರ ಶಿವಾನಿಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿಯುತ್ತದೆ. ಆಕೆ ತನ್ನ ಪತಿಯೊಂದಿಗೆ ಸುದ್ದಿಯನ್ನು ಹಂಚಿಕೊಳ್ಳುತ್ತಾಳೆ . ಆದರೆ ವಿಜಯ್ ಮಧ್ಯಪ್ರವೇಶಿಸಿ ತಾನು ಶಿವಾನಿಯ ಫೋಟೋಗಳನ್ನು ಹೊಸ ವಿಮಾನಯಾನ ಸಂಸ್ಥೆಗೆ ಜಾಹೀರಾತುಗಳಾಗಿ ಬಳಸಿದ್ದೇನೆ ಎಂದು ಬಹಿರಂಗಪಡಿಸುತ್ತಾನೆ. ಇದು ಶಿವಾನಿಗೆ ಕೋಪವನ್ನುಂಟುಮಾಡುತ್ತದೆ. ಆತ ವಿಜಯ್ ಆ ಕೂಡಲೇ ಅಲ್ಲಿಂದ ಹೊರಟು ಹೋಗಬೇಕೆಂದು ಒತ್ತಾಯಿಸುತ್ತಾಳೆ ಮತ್ತು ಅಶೋಕ್ ತನ್ನ ಕೆಲಸ ಮತ್ತು ಹೊಸ ಮನೆಯನ್ನು ಬಿಟ್ಟುಬಿಡಬೇಕೆಂದು ಒತ್ತಾಯಿಸುತ್ತಾಳೆ. ಬದಲಿಗೆ ಕುಟುಂಬಕ್ಕೆ ಸಹಾಯ ಮಾಡಲು ತಾನು ಕೆಲಸ ಮಾಡುತ್ತೇನೆ ಎಂದು ಒತ್ತಾಯಿಸುತ್ತಾಳೆ. ಅವಮಾನಿತನಾಗಿ ಮತ್ತು ಕೋಪಗೊಂಡ ಅಶೋಕ್ ಶಿವಾನಿಗೆ ಕಪಾಳಮೋಕ್ಷ ಮಾಡುತ್ತಾನೆ. ಇದರಿಂದ ಬೇಸತ್ತ ಆಕೆ ಮನೆಯಿಂದ ಹೊರಟು ಹೋಗುತ್ತಾಳೆ . ಇದಕ್ಕೆ ಸಾಕ್ಷಿಯಾದ ವಿಜಯ್ ಅಶೋಕ್ ಅವರನ್ನು ತೀವ್ರವಾಗಿ ಹೊಡೆಯುತ್ತಾನೆ. ಆತ ಆಸ್ಪತ್ರೆಗೆ ದಾಖಲಾದಾಗ ಶಿವಾನಿಯ ಸಮ್ಮುಖದಲ್ಲಿಯೇ ವಿಜಯ್ ಅಶೋಕನ ಆಮ್ಲಜನಕದ ಮುಖವಾಡವನ್ನು ತೆಗೆದುಹಾಕಿ ಆ ಮೂಲಕ ಆತನನ್ನು ಕೊಲ್ಲುತ್ತಾನೆ. ಅಶೋಕನ ಸಾವಿಗೆ ವಿಜಯ್ ಕಾರಣ ಎಂದು ಪೊಲೀಸರಿಗೆ ಮನವರಿಕೆ ಮಾಡಲು ಅವಳು ಪ್ರಯತ್ನಿಸುತ್ತಾಳೆ. ಆದಾಗ್ಯೂ ವಿಜಯ್ ತನ್ನ ಸ್ನೇಹಿತ ಇನ್ಸ್ಪೆಕ್ಟರ್ ಅರ್ಜುನ್ ಸಿಂಗ್ಗೆ ಲಂಚ ನೀಡಿ ಆರೋಪ ಪಟ್ಟಿಯಲ್ಲಿ ತನ್ನ ಹೆಸರು ದಾಖಲಾಗದೇ ಇರುವಂತೆ ನೋಡಿಕೊಳ್ಳುತ್ತಾನೆ . ತಾನು ಮಾಡಿದ್ದು ತಪ್ಪು ಎಂದು ಅರ್ಜುನ್ ಹೇಳುತ್ತಿದ್ದರೂ ವಿಜಯ್ ಶಿವಾನಿಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಮತ್ತು ಬಿಟ್ಟುಕೊಡಲು ನಿರಾಕರಿಸುತ್ತಾನೆ. ಈ ಸಮಯದಲ್ಲಿ ಅವನು ಶಿವಾನಿಯನ್ನು ಭೇಟಿ ಮಾಡಿ ಅವಳು ತನ್ನನ್ನು ಪ್ರೀತಿಸು ಎಂದು ಬೇಡಿಕೊಳ್ಳುತ್ತಾನೆ. ಅವಳು ನಿರಾಕರಿಸಿದಾಗ ಅವನು ಅವಳನ್ನು ಹೊಡೆದು ತನ್ನ ಕೊಲೆ ಯತ್ನಕ್ಕಾಗಿ ಅವಳನ್ನು ಬಂಧಿಸುತ್ತಾನೆ. ಆಕೆ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಆಕೆಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪಿಂಕಿಯನ್ನು ಪದ್ಮಿಶಾ ಮತ್ತು ಮೋಹನ್ ಲಾಲ್ ಅವರ ಆರೈಕೆಯಲ್ಲಿ ಇರಿಸಲಾಗುತ್ತದೆ . ಮೋಹನ್ ಲಾಲ್ ತನ್ನ ಹೆಂಡತಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾನೆ ಮತ್ತು ಪಿಂಕಿಯನ್ನು ಹೊರೆ ಎಂದು ಕರೆಯುತ್ತಾನೆ. ವರದಕ್ಷಿಣೆ ಪ್ರಕರಣದಲ್ಲಿ ಕೊಲೆಯ ತಪ್ಪಾಗಿ ಆರೋಪಿಸಲ್ಪಟ್ಟ ತನ್ನ ಜೈಲಿನ್ ಸೆಲ್ ಮೇಟ್ ನಿಶಾಳನ್ನು ಶಿವಾನಿ ಭೇಟಿಯಾಗುತ್ತಾಳೆ. ಅವರು ಜೈಲಿನಲ್ಲಿ ತಮ್ಮ ನೋವನ್ನು ಕ್ರೂರ ಜೈಲು ವಾರ್ಡನ್ ಅವರ ಕಣ್ಗಾವಲಿನಲ್ಲಿ ಹಂಚಿಕೊಳ್ಳುತ್ತಾರೆ. ಆ ಜೈಲಿನ ವಾರ್ಡನ್ ರಾತ್ರಿಯ ವೇಳೆ ರಾಜಕೀಯ ನಾಯಕರೊಂದಿಗೆ ವೇಶ್ಯಾವಾಟಿಕೆ ಮಾಡಲು ಒತ್ತಾಯಿಸುತ್ತಾರೆ. ಜೈಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆಕೆ ತನ್ನ ಜೈಲು ಸಿಬ್ಬಂದಿಯ ಕ್ರೌರ್ಯದ ಬಗ್ಗೆ ದೂರು ನೀಡುತ್ತಾಳೆ. ಆದರೆ ಆಕೆಯ ಮನವಿಯನ್ನು ನಿರ್ಲಕ್ಷಿಸಲಾಗುತ್ತದೆ. ಬದಲಿಗೆ ಇನ್ಸ್ಪೆಕ್ಟರ್ ಅರ್ಜುನ್ ತನ್ನ ಅಕ್ರಮ ಚಟುವಟಿಕೆಗಳ ವಿರುದ್ಧ ದೂರು ದಾಖಲಿಸಿದ್ದು ಶಿವಾನಿ ಎಂದು ವಾರ್ಡನ್ಗೆ ತಿಳಿಸುತ್ತಾನೆ. ಮೋಹನ್ ಲಾಲ್ ಅವರು ಪದ್ಮಿಸಾನನ್ನು ಪಿಂಕಿಯನ್ನು ತ್ಯಜಿಸುವಂತೆ ಒತ್ತಾಯಿಸುತ್ತಾರೆ. ಆದರೆ ಅವಳು ನಿರಾಕರಿಸುತ್ತಾಳೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಆತ ಪದ್ಮಿಸಾ ಮತ್ತು ಪಿಂಕಿ ಇಬ್ಬರನ್ನೂ ಒದೆಯುತ್ತಾನೆ. ಆಕಸ್ಮಿಕವಾಗಿ ತನ್ನ ಕಾರನ್ನು ಶಿವಾನಿಯ ಸಹೋದರಿ ಮತ್ತು ಮಗಳ ಮೇಲೆ ಚಲಾಯಿಸುವ ವಿಜಯ್ ಅವರನ್ನು ಕೊಲ್ಲುತ್ತಾನೆ. ಶಿವಾನಿಗೆ ಅವರ ಸಾವಿನ ಬಗ್ಗೆ ತಿಳಿದು ವಿಜಯ್ ಅವರನ್ನು ಕೊಂದವನು ಎಂದು ಅರಿತುಕೊಳ್ಳುತ್ತಾಳೆ. ತನ್ನ ಕುಟುಂಬಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಎಲ್ಲಾ ಮಟ್ಟಕ್ಕೂ ಹೋಗಲು ನಿರ್ಧರಿಸುತ್ತಾಳೆ. ಇದಕ್ಕೂ ಮೊದಲು ಅಜಯ್ ಶಿವಾನಿಯನ್ನು ಬಿಡುಗಡೆ ಮಾಡುವ ಭರವಸೆಯೊಂದಿಗೆ ಜೈಲಿನಲ್ಲಿ ಶಿವಾನಿಯನ್ನು ಭೇಟಿ ಮಾಡುತ್ತಾನೆ . ಆಕೆಯ ಹೆಸರನ್ನು ಹೊಂದಿರುವ ಇನ್ನೊಬ್ಬ ಮಹಿಳೆಯೊಂದಿಗೆ ಆತ ಸಂಬಂಧ ಹೊಂದಿದ್ದಾನೆ ಎಂಬ ಸುದ್ದಿಯಿರುತ್ತದೆ. ಆದರೆ ಶಿವಾನಿ ಇನ್ನೂ ನಿರಾಕರಿಸುತ್ತಾಳೆ. ಒಂದು ದಿನ ಒಬ್ಬ ಕೈದಿಯನ್ನು ರಾತ್ರಿಯ ಹೊತ್ತು ಕರೆದೊಯ್ಯಲು ರಾಜಕಾರಣಿಗಳು ಭೇಟಿ ನೀಡಿದಾಗ ಶಿವಾನಿ ವಾಂತಿ ಮಾಡಿಕೊಳ್ಳುತ್ತಾಳೆ. ರಾಜಕಾರಣಿಗಳ ಭೇಟಿಯಿಂದ ಶಿವಾನಿ ಗರ್ಭಿಣಿಯಾಗಿದ್ದಾಳೆಂದು ಜೈಲು ಸಿಬ್ಬಂದಿಗೆ ತಿಳಿದಾಗ ಅವಳು ಶಿವಾನಿಯನ್ನು ತೀವ್ರವಾಗಿ ಥಳಿಸುತ್ತಾಳೆ ಮತ್ತು ಅವಳನ್ನು ಕತ್ತಲೆಯ ಪ್ರತ್ಯೇಕ ಕೋಣೆಗೆ ಎಸೆಯುತ್ತಾಳೆ. ಇದರಿಂದಾಗಿ ಅವಳು ಗರ್ಭಪಾತಕ್ಕೆ ಒಳಗಾಗುತ್ತಾಳೆ. ತನ್ನ ಎಲ್ಲಾ ಪ್ರೀತಿಪಾತ್ರರು ಸತ್ತುಹೋದ ಕಾರಣ ಶಿವಾನಿ ಜಗತ್ತಿನ ಭಾವನೆಗಳಿಂದ ಮರೆಯಾಗಿ ಹೋಗುತ್ತಾಳೆ . ಈಗ ಬದುಕಲು ಆಕೆಯ ಏಕೈಕ ಉದ್ದೇಶವೆಂದರೆ ತನಗೆ ಅನ್ಯಾಯ ಮಾಡಿದ ಎಲ್ಲ ಜನರ ಮೇಲೆ ಸೇಡು ತೀರಿಸಿಕೊಳ್ಳುವುದು. ಅವಳು ಜೈಲಿನಲ್ಲಿ ರಾತ್ರಿಯಿಡೀ ನಡೆಯುವ ಪೂಜಾ ಕಾರ್ಯಕ್ರಮವನ್ನು ಯೋಜಿಸುವ ಮೂಲಕ ಜೈಲು ಸಿಬ್ಬಂದಿಯೊಂದಿಗಳ ಕಾರ್ಯಕ್ಕೆ ಸೇಡು ತೀರಿಸಿಕೊಳ್ಳಲು ಪ್ರಾರಂಭ ಮಾಡುತ್ತಾಳೆ . ತನ್ನ ಪರವಾಗಿ ಹೇಳಲು ಸಾಕ್ಶಿಯೊಬ್ಬಳನ್ನು ಇಟ್ಟುಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಶಿವಾನಿ ರಹಸ್ಯವಾಗಿ ಸೆರೆಮನೆಯ ವಾರ್ಡನ್ ಅನ್ನು ಗಲ್ಲಿಗೇರಿಸಿ ನೇಣು ಹಾಕಿ ಕೊಲ್ಲುತ್ತಾಳೆ. ಯಾವುದೇ ಪುರಾವೆಗಳಿಲ್ಲದ ಕಾರಣ ಮತ್ತು ಬಲವಾದ ಸಾಕ್ಷಿ ಶಿವಾನಿಯ ಪರವಾಗಿರುವುದರಿಂದ ಶಿವಾನಿಗೆ ಶಿಕ್ಷೆ ವಿಧಿಸಲಾಗುವುದಿಲ್ಲ. ಮೂರು ವರ್ಷಗಳ ನಂತರ ಶಿವಾನಿ ಜೈಲಿನಿಂದ ಬಿಡುಗಡೆಯಾಗುತ್ತಾಳೆ. ಆಕೆ ಮೋಹನ್ ಲಾಲ್ ಅವರನ್ನು ರೂಪಾಯಿ ನೋಟುಗಳಿಂದ ಉಸಿರುಗಟ್ಟಿಸಿ ಮತ್ತು ಆತನ ಕೈಯಿಂದ ಗಣನೀಯ ಪ್ರಮಾಣದ ಮಾಂಸವನ್ನು ಅಗಿಯುವ ಮೂಲಕ ಕೊಲ್ಲುತ್ತಾಳೆ. ಇನ್ಸ್ಪೆಕ್ಟರ್ ಅರ್ಜುನ್ ಈ ಕೊಲೆಗೆ ಶಿವಾನಿಯೇ ಕಾರಣ ಎಂದು ಶಂಕಿಸುತ್ತಾರೆ . ಶಿವಾನಿ ತನ್ನ ಮಗಳ ಬಗ್ಗೆ ಆಕೆಯ ಸಮಾಧಿಯಲ್ಲಿ ದುಃಖಿಸುತ್ತಿದ್ದಾಗ ಇನ್ಸ್ಪೆಕ್ಟರ್ ಅರ್ಜುನ್ ಅವಳನ್ನು ಅಸಭ್ಯವಾಗಿ ತಡೆಯಲು ಅವಳ ಸಮಾಧಿಯ ಮೇಲೆ ಹೆಜ್ಜೆ ಹಾಕುತ್ತಾನೆ. ಅವನು ಅವಳನ್ನು ಬೆನ್ನಟ್ಟುತ್ತಾನೆ ಮತ್ತು ಕೊಟ್ಟಿಗೆಯಲ್ಲಿ ಅವಳ ಮೇಲೆ ಅತ್ಯಾಚಾರ ಮಾಡುತ್ತಾನೆ. ಆದಾಗ್ಯೂ, ಶಿವಾನಿ ಅವನನ್ನು ಹಿಮ್ಮೆಟ್ಟಿಸಿ ಕೊಟ್ಟಿಗೆಗೆ ಬೆಂಕಿ ಹಚ್ಚುತ್ತಾಳೆ. ಅವನನ್ನು ಸಾಯುವಂತೆ ಮಾಡುತ್ತಾಳೆ. ಶಿವಾನಿ ವಿಜಯ್ ಅವರ ಮನೆಗೆ ಭೇಟಿ ನೀಡುತ್ತಾರೆ . ಆದರೆ ವಿಜಯ್ ಮತ್ತು ಅವರ ತಾಯಿ ಎರಡು ವರ್ಷಗಳ ಹಿಂದೆ ಅಲ್ಲಿಂದ ಹೊರಟುಹೋದರು ಎಂದು ತಿಳಿಯುತ್ತದೆ. ತಾನು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಆಸ್ಪತ್ರೆಯಲ್ಲಿ ಅಂಗವಿಕಲರಿಗೆ ಸೇವೆ ಸಲ್ಲಿಸಲು ತನ್ನ ಜೀವನವನ್ನು ಮುಡಿಪಾಗಿಡಲು ಅವಳು ನಿರ್ಧರಿಸುತ್ತಾಳೆ. ಅಲ್ಲಿನ ವೈದ್ಯರು ಆಕೆಗೆ ಟಿಕಮ್ಗಢದಲ್ಲಿರುವ ತಮ್ಮ ಹೊಸ ಆರೋಗ್ಯಧಾಮದಲ್ಲಿ ಉಳಿಯಲು ಸಲಹೆ ನೀಡುತ್ತಾರೆ . ಆಕೆ ಅಲ್ಲಿಗೆ ತಲುಪಿದಾಗ, ಆ ಆರೋಗ್ಯಧಾಮವನ್ನು ವಿಜಯ್ನ ತಾಯಿಯು ನಿರ್ಮಿಸಿದ್ದಳು ಎಂದು ತಿಳಿಯುತ್ತದೆ. ಶಿವಾನಿಯ ಸಹೋದರಿ ಮತ್ತು ಮಗಳನ್ನು ಕೊಂದ ಕಾರು ಅಪಘಾತದಿಂದಾಗಿ ಚಲಿಸುವ ಸಾಮರ್ಥ್ಯವನ್ನು ಕಳೆದುಕೊಂಡ ವಿಜಯ್ ಆರೋಗ್ಯಧಾಮದಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದನ್ನು ಶಿವಾನಿ ಕಂಡುಕೊಳ್ಳುತ್ತಾಳೆ. ಅವನಿಗೆ ಪುನರ್ವಸತಿ ಕಲ್ಪಿಸಲು ಅವಳು ಸ್ವಯಂಸೇವಕಿಯಾಗಿರುತ್ತಾಳೆ. ಶಿವಾನಿಯ ಪ್ರೀತಿ ಮತ್ತು ಗಮನದಿಂದ ವಿಜಯ್ ಗುಣಮುಖನಾಗುತ್ತಾನೆ. ವಿಜಯ್ ಮತ್ತೊಮ್ಮೆ ಶಿವಾನಿಗೆ ತಾನು ಪ್ರೀತಿಸುತ್ತೇನೆ ಮತ್ತು ಜೀವನದಲ್ಲಿ ಬೇರೆ ಆಯ್ಕೆಗಳಿಲ್ಲದ ಕಾರಣ ಅವನನ್ನು ಮದುವೆಯಾದುವಂತೆ ಹೇಳುತ್ತಾನೆ. ಆದರೆ ಶಿವಾನಿ ಅವನನ್ನು ಒಮ್ಮೆ ಅಪ್ಪಿಕೊಂಡು ಇರಿದು ಬಿಡುತ್ತಾಳೆ . ತಾನು ಅವನನ್ನು ಆರೋಗ್ಯವಂತನಾಗಬೇಕೆಂದು ಶುಶ್ರೂಷೆ ಮಾಡಿದ್ದೇನೆಂದು ಅವಳು ಒಪ್ಪಿಕೊಳ್ಳುತ್ತಾಳೆ. ಆದರೆ ಹಾಗೆ ಮಾಡಿದ್ದು ಅವನನ್ನು ಕೊಲ್ಲಲು ಎಂದು ಹೇಳುತ್ತಾಳೆ. ಏಕೆಂದರೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಒಬ್ಬ ಅಸಮರ್ಥ ವ್ಯಕ್ತಿಯನ್ನು ಕೊಲ್ಲುವುದು ಪಾಪ ಎಂದೇ ಅವನನ್ನು ಹುಷಾರ್ ಮಾಡಿದೆ ಎಂದು ಅವಳು ಹೇಳುತ್ತಾಳೆ. ಅವರ ಜಗಳದಲ್ಲಿ ಅವರು ವಿಜಯ್ ಶಿವಾನಿಯ ಪಾದ ಹಿಡಿದು ಬಂಡೆಯಿಂದ ತೂಗಾಡುವ ಸ್ಥಿತಿಗೆ ತಲುಪುತ್ತಾರೆ . ತಾನು ಸಾಯುವ ಸ್ಥಿತಿಯಲ್ಲಿದ್ದರೆ ಶಿವಾನಿಯನ್ನು ತನ್ನೊಂದಿಗೆ ಕರೆದೊಯ್ಯುವುದಾಗಿ ವಿಜಯ್ ಹೇಳುತ್ತಾನೆ. ವಿಜಯ್ಗೆ ತಾನು ಬದುಕುವುದಕ್ಕಿಂತ ಸಾಯುವುದು ಮುಖ್ಯ ಎಂದು ನಿರ್ಧರಿಸಿದ ಶಿವಾನಿ ಬಂಡೆಯಿಂದ ತನ್ನ ಕೈ ಬಿಡುತ್ತಾಳೆ. ಅವರಿಬ್ಬರೂ ಪ್ರಪಾತಕ್ಕೆ ಬಿದ್ದು ಸಾಯುತ್ತಾರೆ. == ಪಾತ್ರವರ್ಗ == ವಿಜಯ್ ಅಗ್ನಿಹೋತ್ರಿ ಪಾತ್ರದಲ್ಲಿ ಶಾರುಖ್ ಖಾನ್, ಮುಖ್ಯ ಖಳನಾಯಕ ಶಿವಾನಿ ಚೋಪ್ರಾ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಪದ್ಮಿಸಾ ಸಿಂಗ್ ಪಾತ್ರದಲ್ಲಿ ಸುಧಾ ಚಂದ್ರನ್, ಶಿವಾನಿಯ ಸಹೋದರಿ ಮತ್ತು ಮೋಹನ್ ಲಾಲ್ ಅವರ ಪತ್ನಿ ಶಿವಾನಿಯ ಸೋದರಳಿಯ ಮತ್ತು ಪದ್ಮಿಶಾಳ ಪತಿಯಾದ ಮೋಹನ್ ಲಾಲ್ ಸಿಂಗ್ ಪಾತ್ರದಲ್ಲಿ ಟಿನ್ನು ಆನಂದ್ ಚಂಪಾ ಚಮೇಲಿಯಾಗಿ ಜಾನಿ ಲಿವರ್ ವಿಜಯ್ ಅವರ ತಾಯಿ ಶ್ರೀಮತಿ ಪದ್ಮ ಅಗ್ನಿಹೋತ್ರಿ ಪಾತ್ರದಲ್ಲಿ ಬೀನಾ ಬ್ಯಾನರ್ಜಿ ಶಿವಾನಿಯ ಸ್ನೇಹಿತೆ ನಿಶಾಳಾಗಿ ಹಿಮಾನಿ ಶಿವಪುರಿ ಇನ್ಸ್ಪೆಕ್ಟರ್ ಅರ್ಜುನ್ ಸಿಂಗ್ ಪಾತ್ರದಲ್ಲಿ ಕಿರಣ್ ಕುಮಾರ್ ಜೈಲು ವಾರ್ಡನ್ ಆಗಿ ಕಲ್ಪನಾ ಅಯ್ಯರ್ ಸಚಿವರಾಗಿ ದಿನೇಶ್ ಹಿಂಗೂ ಪಿಂಕಿ ಚೋಪ್ರಾ, ಅಶೋಕ್ ಮತ್ತು ಶಿವಾನಿ ಅವರ ಮಗಳಾಗಿ ಬೇಬಿ ಗಜಾಲಾ ದೀನಾನಾಥ್ ಪಾತ್ರದಲ್ಲಿ ಶ್ರೀರಾಮ್ ಲಾಗೂ ಅತಿಥಿ ಪಾತ್ರ ಶಿವಾನಿಯ ದಿವಂಗತ ಪತಿಯಾದ ಅಶೋಕ್ ಚೋಪ್ರಾ ಪಾತ್ರದಲ್ಲಿ ದೀಪಕ್ ತಿಜೋರಿ == ಉತ್ಪಾದನೆ == ದೀಕ್ಷಿತ್ ಮತ್ತು ಖಾನ್ ನಡುವಿನ ಅನೇಕ ಸಹಯೋಗಗಳಲ್ಲಿ ಅಂಜಾಮ್ ಮೊದಲನೆಯದಾಗಿದೆ. == ಸೌಂಡ್ಟ್ರ್ಯಾಕ್ == ಟೆಂಪ್ಲೇಟು: ratingsಪ್ಲಾನೆಟ್ ಬಾಲಿವುಡ್ನ ರಾಕೇಶ್ ಬುಧು ಈ ಆಲ್ಬಂಗೆ 7.5 ಸ್ಟಾರ್ಗಳನ್ನು ನೀಡಿ, "ಅಂಜಾಮ್ನ ರಾಗಗಳು ಒಟ್ಟಾರೆಯಾಗಿ ಮಿಶ್ರವಾದ ಯೋಗ್ಯತೆಯನ್ನು ಹೊಂದಿವೆ . ಇಲ್ಲಿನ ಸುಮಧುರವಾದ ಹಾಡುಗಳು ಧ್ವನಿಪಥವನ್ನು ಉನ್ನತ ಗುಣಮಟ್ಟಕ್ಕೆ ಯೋಜಿಸಲು ಸಾಕಾಗಿದ್ದವು ಆದರೆ ಉಳಿದವುಗಳಿಂದ ೨.೫ ಸ್ಟಾರ್ಗಳು ಕಡಿತವಾಗುತ್ತವೆ ಎಂದು ಬರೆಯುತ್ತಾರೆ. ಈ ಆಲ್ಬಂನಲ್ಲಿ ಅಭಿಜಿತ್ ಹಾಡಿದ ಏಕೈಕ ಹಾಡು" ಬಡಿ ಮುಷ್ಕಿಲ್ ಹೈ "ಅನ್ನು ಇಲ್ಲಿಯವರೆಗಿನ ಅತ್ಯಂತ ಸುಮಧುರ ಹಾಡುಗಳಲ್ಲಿ ಒಂದಾಗಿದೆ" ಎಂದು ಹೇಳಿದ್ದಾರೆ. === ಟ್ರ್ಯಾಕ್ ಪಟ್ಟಿ === == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಂಜಾಮ್ @ ಐ ಎಮ್ ಡಿ ಬಿ